Friday, August 8, 2008

ಶೋಧ.........

(ಇದು ನನ್ನ ಕನಸಿನ ಕಥೆ 'ಶೋಧ'ದ ತುಣುಕು.. ಕನಸುಗಳ ಕಥೆಯ ಸಂಗ್ರಹ 'ಪಯಣ ಸಾಗಿದಂತೆ.....'ಯಲ್ಲಿ ಪ್ರಕಟವಾಗಿದೆ.ಮತ್ತು ಮಯೂರದ 'ಗುಬ್ಬಚ್ಚಿಗೂಡು'ವಿನಲ್ಲಿ ಪ್ರಕಟವಾದ 'ಕರುಣಾಳು ಬಾ ಕನಸೇ' ಯಲ್ಲಿಯೂ ಸೇರಿಕೊಂಡಿದೆ. ಇದರ ಆ೦ಗ್ಲ ಭಾಷಾಂತರ 'the pot full of water' ,yahoo dreams group ನಲ್ಲಿ ಚರ್ಚೆಗೊಳಗಾಗಿದೆ.. )

ಏನನ್ನೋ ಅರಸುತ್ತಾ ದಾರಿಯ ಮಧ್ಯೆ ನಡೆದು ಬರುವ ನಾನು 'ಒಳಗೆ ಏನೋ ಇದೆ' ಎಂದು ಮನಗಂಡು ಪ್ರವೇಶಿಸಿದ ಗಾಜಿನ ಕಟ್ಟಡದ ಗೋಡೆಯ ಮೇಲೆ ಮೂರು ದೃಶ್ಯಗಳು ಮೂಡಿದವು . ಅದನ್ನು ನಾನು, ಹಾಗೂ ನನ್ನ ಸಾಲಿನಲ್ಲಿಯೇ, ನನ್ನ ಪಕ್ಕದ ಕುರ್ಚಿಯನ್ನು 'ಖಾಲಿ' ಬಿಟ್ಟು 'ಅಂತರ'ವೊಂದನ್ನು ಕಾಪಾಡಿಕೊಂಡು ಕೂರುವ ಸುಂದರ ಯುವತಿ ನೋಡಿದೆವು.. ಗೋಡೆಯ ಮೇಲಿನ ಚಿತ್ತಾರ ಕಥೆಯೊಂದನ್ನು ನಮ್ಮೆದುರಿತ್ತಿತು.

ಅಲ್ಲೊಂದು ನದಿ. ಸುಮಾರು ಮೈಲಿ ದೂರದಿಂದ ನೀರು ತೆಗೆದುಕೊಂಡು ಹೋಗಲು ಹುಡುಗಿಯೊಬ್ಬಳು ಅಲ್ಲಿಗೆ ಬರುತ್ತಿದ್ದಳು. ಎರಡು ತುಂಬಿದ ಕೊಡದೊಡನೆ ಹಿಂದಿರುಗುತ್ತಿದ್ದಳಾದರೂ ಮನೆ ಸೇರುವ ಹೊತ್ತಿಗೆ ನೀರು ಅರ್ಧಕ್ಕೇ ಇಳಿದು ಬಿಡುತ್ತಿತ್ತು.. ಹೀಗೇ ಎಷ್ಟೋ ದಿನಗಳು ಅ ಹುಡುಗಿಯ ನಿರಾಸೆ, ಅಸಹಾಯಕತೆಗಳೊಡನೆ ಕಳೆಯುತ್ತಿತ್ತು. ಅವಳು ನದಿಯೆಡೆಗೆ ಹೋದಾಗಲೆಲ್ಲ ಅದಕ್ಕೆ ಹೂವುಗಳನ್ನು ಕಿತ್ತು ಅರ್ಪಿಸಿ ಬೇಡುತ್ತಿದ್ದಳು, 'ಓ ಶಕ್ತಿಯೇ ಇಂದಾದರೂ ಕೊಡದ ತುಂಬ ನೀರುಳಿಸು...' ಆಕೆಯ ಸಮಸ್ಯೆ ದಿನಗಳುರುಳಿದರೂ ಬಗೆಹರಿಯಲಿಲ್ಲ. ಅಂದು ನಿರ್ಧರಿಸಿಕೊಂಡು ಒಂದೇ ಕೊಡ ತಂದಳು. ನೀರನ್ನು ತುಂಬಿ ತುಂಬ ಜಾಗರೂಕಳಾಗಿ ವರ್ತಿಸುತ್ತ ಮನೆಗೆ ಬಂದಳು..ಅವಳಿಗೆ ಪರಮಾನಂದವಾಗಿ ಹೋಯಿತು. ಏನಾಶ್ಚರ್ಯ ! ಅಂದು ಕೊಡ ತುಂಬಿತ್ತು.. ಅನಂದದಿಮ್ದ ಉಬ್ಬಿ ಹೋದವಳು ಮರುದಿನ ನದಿಯೆಡೆಗೆ ಬಂದು ಹೂಗಳನ್ನರ್ಪಿಸಿ ಶಕ್ತಿಗೆ ಕೃಥಜ್ೞಥೆಗಳನ್ನರ್ಪಿಸಿ ಕೂಗಿದಳು, 'ಕೊನೆಗೂ ನನ್ನ ಅಸೆ ಈಡೇರಿಸಿದೆಯಲ್ಲಾ. ನಾನು ನಿನಗೆ ಋಣಿ.. '. ಅಷ್ಟರಲ್ಲಿ ಅಶರೀರವಾಣಿಯೊಂದು ಹೇಳಿತು , "ತಂಗೀ, ಒಮ್ಮೆ ಆ ದಿನವನ್ನು ಸರಿಯಾಗಿ ನೆನೆಪಿಸಿಕೋ. ಅಂದು ನಿನ್ನ ಮನದಲ್ಲಿ ನಾನಿರಲಿಲ್ಲ.. ಇದ್ದದ್ದು ಕೊಡ, ನೀರು ಮಾತ್ರ!." ಅವಳು ಹಿಗ್ಗಿ ಹೋದಳು 'ಅರೆ! ದೇವರೇ ನನ್ನೊಡನೆ ಮಾತನಾಡಿದ..' ಸಂತಸದಿಂದ ಓಡಿ ಹೋಗಿ ಊರಿಗೆಲ್ಲ ಸುದ್ದಿ ತಿಳಿಸಿದಳು, 'ದೇವರು ಮಾತನಾಡಿದ!'
ಮಾರನೆಯ ದಿನ ವಿಷಯ ನಿರೂಪಿಸಲು ಎಲ್ಲರೊಡಗೂಡಿ ನದಿಯ ತೀರಕ್ಕೆ ಬಂದು ಅಂದಿನಂತೆಯೇ ಹೇಳಿದಳು, "ಕೊನೆಗೂ ನನ್ನಾಸೆ ಈಡೇರಿಸಿದೆಯಲ್ಲಾ...........ನಿನಗೆ ನಾನು ಋಣಿ..." ಎಷ್ಟು ಬಾರಿ ಚೀರಿದರೂ ಯಾವ ವಾಣಿಯೂ ಪ್ರತಿಕ್ರಿಯಿಸಲಿಲ್ಲ..ಎಲ್ಲರು ಚೇಡಿಸಿದರು, ಅವಮಾನಿಸಿದರು.ಎಲ್ಲ ಹೋದ ಮೇಲೆ ಕೊಡ ಹೊತ್ತು ನಿರಾಸೆಯಿಂದ ಮನೆಗೆ ತೆರಳುತ್ತಿದ್ದವಳಿಗೆ ಕೊಡದ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣಿಸಿತು. ಅದು ಹೇಳಿತು, "ಅಯ್ಯೋ ಹುಚ್ಚಿ, ನಿನ್ನನ್ನೇ ನೀನು ಗುರುತಿಸಲಾರಳಾದೆಯಾ? ನಿನ್ನನ್ನು ಗೆಲ್ಲುವಂತೆ ಮಾಡಿದ್ದು ನಿನ್ನ ಗಮನ ಮಾತ್ರ.. ಇಡೀ ಪ್ರಪಂಚಕ್ಕೆ ಶಕ್ತಿಯ ವಿಷಯ ತಿಳಿಸಲು ಹೊರಟು ನಿನ್ನನ್ನೇ ನೀನು ಅರಿಯಲಾರಳಾದೆ..ಮೊದಲು ನಿನ್ನೊಳಗೆ ಅನುದಿನ,ಅನುಕ್ಷಣ ನೆರೆದಿರುವ 'ನಿನ್ನತನ'ವನ್ನು ನಂಬು. ಯಾವ ಅಸ್ತಿತ್ವವನ್ನು ಅಲ್ಲ..." ನೀರಿನ ಪ್ರತಿಬಿಂಬ ಅವಳ ಮನವನ್ನು ಕಲಕಿತು. ಅಂದು ಕೊಡ ತುಂಬಿತ್ತು. ಒಳಗೆ ಅವಳೇ ತಂದ ನೀರಿತ್ತು..
~ಸುಷ್ಮ ಸಿ೦ಧು

(image courtesy-web)

4 comments:

Anonymous said...

kanasugala hosalokakke kondoyyuttiruva sushma, nimma kanasu adhbhutavagide. vichara prachodakavagide. nammanne navu nambabekennuva ondu 'concept'mahattaravadaddu. nimma kanasugalige bhavya svagata.

Sushma Sindhu said...

hii,
many thanks to you anonymous!

kanasu said...

hi sushma..
ur comment brought me to ur blog...saw both the blogs..nice writings..khushiyaitu :)
keep it up..

Sushma Sindhu said...

Hii 'kanasu',
Thanks for visiting my blogs and leaving encouraging feedback.
~Sushma