Wednesday, January 2, 2013

‘ಕಂಡೆ ನಾನೊಂದು ಕನಸು’ ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 9

 
ಮನಸ್ಸಿಗೆ ಪ್ರತಿಮೆ’, ‘ಸಂಕೇತಗಳು ಬಹಳ ಪ್ರಿಯ. ಅದಕ್ಕೇ ಆಗಸದಷ್ಟು ವಿಶಾಲವಾದ’, ‘ಶಿಖರದದೆತ್ತರಕ್ಕೆಎಂಬಂತಹ ವಾಕ್ಯಗಳು ವಸ್ತು-ವಿಷಯಗಳ ವ್ಯಾಪ್ತಿಯನ್ನು ಅರ್ಥೈಸಿ ಆನಂದಿಸಲು ಸಹಕಾರಿಯಾಗುತ್ತವೆ. ಕನಸಿನಲ್ಲಿ ಜಾಗೃತಗೊಂಡ ಮನಸ್ಸಿನಲ್ಲಿ ಮೂಡುತ್ತಿದ್ದ ಹಕ್ಕಿಯ ರೂಪವೂ ಇದೇ ತರಹದ ಉದ್ದೇಶವನ್ನೇ ಈಡೇರಿಸುವ ಸಲುವಾಗೇ ಬಂದಂತೆ ಅನಿಸುವುದಿದೆ. ಹಕ್ಕಿ ಸ್ವತಂತ್ರ್ಯದ ಜೊತೆ ಜೊತೆಗೇ ಪ್ರಪಂಚದ ವೈಶಾಲ್ಯತೆಗೆ ತಲುಪಿಕೊಳ್ಳಬಲ್ಲ ಸಾಧ್ಯತೆಯಿರುವ ದೈಹಿಕ ಸಾಮರ್ಥ್ಯವಿರುವುದರಂತೆಯೂ, ಸಂದೇಶಗಳ ವಾಹಕದಂತೆಯೂ ಕಾಣಿಸುತ್ತದೆ: ಹೀಗೆ ಹಕ್ಕಿಯ ರೂಪಿನ ಅಸ್ಥಿತ್ವದ ಬಗೆಗೆ ಮಂಥಿಸಲು ಹೊರಟಿರುವ ಮನಸ್ಸೂ ಸಂಕೇತಗಳ ತೆರೆದಿಡುತ್ತಾ, ಅದರ ಸಾಧ್ಯಾಸಾಧ್ಯತೆಗಳನ್ನು ಒಪ್ಪಿಕೊಳ್ಳುತ್ತಾ ತನಗಿರುವ ಸಂಕೇತಗಳ ಪ್ರೀತಿಯನ್ನೇ ಹೊರಹಾಕಿ ಮನಸ್ಸಿಗೆ ಅದರ ಮೇಲಿರುವ ಒಲವನ್ನೇ ತೋರಿಸುತ್ತಲಿದೆ!

ಮತ್ತೆ ಎದುರಾದ ಕನಸುಗಳಲ್ಲಿ ಬಣ್ಣ ಬಣ್ಣದ ಆ ಹಕ್ಕಿ ಅರುಹಿತು:
ಒಳ ಮತ್ತು ಹೊರ ಮನಸ್ಸಿನ ನಡುವೆ ಒಂದು ಸೇತುವೆ ಇರಬೇಕು. ಹೊರಗಿನ ದ್ವಂದ್ವಗಳು ಸೇತುವೆಯ ಮೇಲಿನಿಂದ ಒಳಪ್ರವೇಶಿಸಿ, ಒಳಗೆ  ಸಿಕ್ಕ ಪರಿಹಾರ’, ‘ಉತ್ತರಗಳುಸೇತುವೆಯ ದಾಟಿ ಹೊರಗೆ ವ್ಯಕ್ತವಾಗಬೇಕು. ಇದೇ ಕೆಲಸವೇ ಅದಲುಬದಲಾದಾಗಲೇ ಮನಸ್ಸು ತನ್ನ ಸಮಸ್ಥಿತಿಯನ್ನು ಕಳೆದುಕೊಂಡು ತೊಳಲಾಡಿಬಿಡುತ್ತದೆ’’
ಪಕ್ಷಿ ಮತ್ತೊಮ್ಮೆ ಬಂದಾಗ ಹೀಗೆ ಹೇಳಿತ್ತು:  ನೆಲದ ಮೆಲೆಯೇ ನಿಂತು ಇತರರನ್ನು ನೋಡಿದಾಗ ಯಾರ ಮುಂದೆಯೂ ನಾವು ಕೀಳುಎಂದೋ, ಎಲ್ಲರಿಗಿಂತ ಮೇಲುಎಂದೋ ಭಾವಿಸುವುದು ಅಸಾಧ್ಯ. ನಾವು ಯಾವಾಗ ನೆಲಮಟ್ಟಕ್ಕಿಂತ ಒಂದಷ್ಟಡಿ ಕೆಳಗೆ ಗುಂಡಿಯಲ್ಲಿ ನಿಂತೋ, ನೆಲದ ಮಟ್ಟದಿಂದ ಒಂದಿಷ್ಟುದ್ದ ಮೇಲೆ ನಿಂತೋ ಬೇರೆಯವರ ನೋಡುತ್ತೇವೆಯೋ ಆಗಲೇ ಈ ಭಾವನೆಗಳು ಕಾಡುವವು.
ಹೀಗೆ ಕಾಣಸಿಗುವ ಚುಟುಕು ಸಂದೇಶಗಳುಳ್ಳ ಕನಸುಗಳು ಅಷ್ಟೇನು ಚುಟುಕಾಗಿರುತ್ತಿರಲಿಲ್ಲ. ಹಕ್ಕಿ-ನನ್ನ ನಡುವಿನ ಹಲವು ಸಂಭಾಷಣೆಗಳು ಇಂತಹ ಮಾತುಗಳಿಗೆ ಎಡೆ ಮಾಡಿ ಕೊಡುತ್ತಿದ್ದವು. ಹಕ್ಕಿ ಮೊದಮೊದಲಷ್ಟೇ ನನಗೆ ಸಂಭಂದಿಸಿದೆಎನ್ನುವಂತಿದ್ದ ಸಂದೇಶಗಳ ತಂದಿದ್ದು. ನಂತರದ ದಿನಗಳಲ್ಲಿ ನಾನು ಚಿಂತಿಸಿಯೇ ಇಲ್ಲವೆನ್ನುವಂತಹ ವಿಷಯಗಳು ವಸ್ತುವಾಗಿ ಕನಸಿನಿಂದ ಎದ್ದಮೇಲೆ ನನ್ನ ಧೃತಿಗೆಡಿಸುತ್ತಿದ್ದವು. ಕನಸುಗಳು ಪದೇ ಪದೇ ಹಕ್ಕಿಯನ್ನು ಹೊತ್ತು ತರುವುದು ಹೆಚ್ಚಾದಂತೆ ನನಗೆ ಆ ಪಕ್ಷಿಯೊಡನೆ ಸಲುಗೆ ಬೆಳೆದಂತೆ ತೋರಿತು. ಅದು ನಮ್ಮ ಕನಸಿನ ಸಂಭಾಷಣೆಗಳಲ್ಲಿಯೂ ಕಾಣಿಸುತ್ತಿತ್ತು.
 ಒಂದು ಬಾರಿ ನಾನು ಹಕ್ಕಿಯ ಕೇಳುವೆ:
ಅಲ್ಲಾ ನೀನು ಇಷ್ಟೊಂದು ವಿಷಯಗಳನ್ನು ಎಲ್ಲಿಂದ ಹುಡುಕಿ ತರುವೆ?”
ಪಕ್ಷಿ: ಹುಡುಕುವ ಅವಶ್ಯಕತೆಯಿಲ್ಲ. ಅವು ಲಭಿಸುವುವು..
ನಾನು : ಸರಿ, ಪ್ರಶ್ನೆ-ಚರ್ಚೆಗಳಿಗೆ ಉತ್ತರಗಳನ್ನಾದರೋ ಹೇಗೆ ಚಿಂತಿಸುವೆ?”
ಪಕ್ಷಿ: ಚಿಂತಿಸುವ ಅಗತ್ಯವಿಲ್ಲ. ಅವು ಇರುವವು. ಅದನ್ನು ಮುಂದಿಡುವುದಷ್ಟೇ ಕೆಲಸ
ನಾನು:  ‘’ಇದು ಅತಿ ಒಗಟಿನ ಮಾತಾಯಿತು. ಸ್ಪಷ್ಟವಾಗಿ ಹೇಳು. ನನಗೇ ದೊರೆಯದ ಉತ್ತರ ನನ್ನಲ್ಲಿರುವ ನಿನಗೆ ಹೇಗೆ ದೊರೆಯುವುದು’’
ಪಕ್ಷಿ: ನೀನು ದೊರೆಯದಉತ್ತರಯೆಂದೆಯಲ್ಲವೆ, ‘ಇರದಉತ್ತರ ಎನ್ನಲಿಲ್ಲವಲ್ಲ! ಹಾಗಾಗಿ, ‘ಇರುವಆದರೆ ದೊರೆಯದಉತ್ತರವ ನಾನು ದೊರಕಿಸುವೆ. ಸ್ಪಷ್ಟವೆ?”
ನಾನು : ಇದು ಬರೀ ಯಾಮಾರಿಸುವ ಉತ್ತರದಂತಿದೆ, ಸ್ಪಷ್ಟ ಆದರೂ ಅಸ್ಪಷ್ಟ. ನಾನು ನಂಬುವುದಿಲ್ಲ
ಪಕ್ಷಿ : ನಾನು ನಂಬಿಸುವ ಅಗತ್ಯವಿಲ್ಲ, ಇರುವುದು ಇರುತ್ತದೆ. ನಂಬಿಕೆ- ಅಪನಂಬಿಕೆ  ಮನಸ್ಸಿಗೆ ಸಂಬಂಧಿಸಿದ್ದು, ಇರುವಿಕೆಗಲ್ಲ
.........
ಈ ಕನಸು ನನಗೆ ಎರಡು ಅವಕಾಶವ ನೀಡಿತ್ತು- ಒಂದೋ, ನನ್ನಲ್ಲಿ ಏನೋ ಇದೆಎಂಬ ಇರುವಿಕೆಯ ನಂಬಬೇಕು. ಇಲ್ಲವೇ ಈಗಾಗಲೇ ಇರುವ, ‘ನಾನು ಅಯೋಗ್ಯಳುಎಂಬ ನಂಬಿಕೆಯನ್ನೇ ಇರಿಸಬೇಕು. ನಾನು ಬಹಳ ನಿಷ್ಠೆಯಿಂದ ಎರಡನೆಯದನ್ನು ಆಯ್ದುಕೊಂಡೆ! ಹಾಗೆಂದು, ಮೊದಲನೆಯ ಆಯ್ಕೆಯನ್ನು ನಾನು ಆಯ್ದುಕೊಳ್ಳಬೇಕಿತ್ತೆಂದು ನಾನು ಹೇಳುವುದೇ ಇಲ್ಲ- ನಮ್ಮಲ್ಲಿ ಏನಾದರೂ ಇದ್ದದ್ದೇ ಆದರೆ ಅದು ಇರುತ್ತದೆ, ಅದನ್ನು ನಂಬಿ ಬಲಪಡಿಸುವ ಅಗತ್ಯವಿಲ್ಲ. ಕೆಲವೊಮ್ಮೆ ನಂಬುವ ಬರದಲ್ಲಿ ಇರುವುದಕ್ಕಿಂತ ಹೆಚ್ಚೇ ಇದೆಯೆಂದು ನಂಬುವುದೂ ಆಗುವುದರಿಂದ ಅದು ಬಹಳ ಅಪಾಯಕಾರಿ ಆಯ್ಕೆಯೇ ಆಗಿದೆ. ನಂಬಿಕೆ ಇರಬೇಕು. ಅದನ್ನು ನಂಬುವ, ಇದೆ ಎಂದು ಭದ್ರ ಪಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದರೆ ನಂಬಿಕೆ ಇದೆಯೋ-ಇಲ್ಲವೋಅಥವಾ ಅದು ಧನಾತ್ಮಕವೋ-ಋಣಾತ್ಮಕವೋಎನ್ನುವುದರ ಬಗೆಯೇ ಅಪನಂಬಿಕೆಯಾಗಿಬಿಟ್ಟರೆ ಕಷ್ಟವಷ್ಟೆ!
ಮೇಲಿನ ಎಲ್ಲಾ ಕನಸುಗಳ ತುಣುಕುಗಳ ಸಾರಾಂಶವ ಅವಲೋಕಿಸಿದರೆ, ಅಂದು ನಾನು ನನ್ನದಾಗಿಸಿಕೊಳ್ಳಬೇಕಿದ್ದ ಅಂಶವು ಇದೇನೋ ಎನಿಸುತ್ತದೆ- ಒಳಮನಸ್ಸು ಸಬಲತೆಗೆ ಹವಣಿಸುತ್ತದೆ, ಅದು ಯಾವ ದಿಕ್ಕನ್ನು ಅನುಸರಿಸಲು, ಗುರಿಯ  ಹೊಂದಲು ಹಂಬಲಿಸುವುದೋ ಅದರೆಡೆಗೆ ಸಾಗಬಲ್ಲ ಸಾಮರ್ಥ್ಯವನ್ನೂ ಆಗಾಗ್ಗೆ ಪ್ರತಿಫಲಿಸುತ್ತಿರುತ್ತದೆ, ತನ್ನ ಶಕ್ತಿಯ ಗುರುತಿಸಿಕೊಳ್ಳಲು ಅದಕ್ಕೆ ಸಾಧ್ಯತೆಗಳ ಪರಾಮರ್ಶಿಸುವ ಅವಶ್ಯಕತೆಯಿಲ್ಲ. ಆದರೆ ಈ ಗುರುತಿಸುವಿಕೆಯ ನಂತರ ಶಕ್ತಿಯ ಹೊರಹಾಕುವಿಕೆಯಾಗಲು ನಮ್ಮ ಹೊರಮನಸ್ಸು ಸಿದ್ಧವಿರಬೇಕಾಗುತ್ತದೆ. ಈ ಹೊರಮನಪರಿಸ್ಥಿತಿಗಳ ಗುಲಾಮನಂತೆಯೂ, ಅಸಹಾಯಕನಾಗಿಯೂ, ಭಯಗ್ರಸ್ಥನಾಗಿಯೂ ಯಾವಾಗ ಪೀಡಿತವಾಗಿರುತ್ತದೋ ಆಗ ಅಲ್ಲಿ ಪರಸ್ಪರ ಸಹಕಾರ ನೆರವೇರುವುದಿಲ್ಲ. ಅಲ್ಲಿ ನೆರವಿಗೆ ಬರಬೇಕಾಗಿರುವುದೇ ಒಳ-ಹೊರ ಮನಗಳ ಬೆಸೆಯುವ ಸೇತುವೆ. ಎಂದು ನಮಗೆ ಇಂತಹುದೊಂದು ಸಶಕ್ತಗೊಳ್ಳುವಿಕೆನಮ್ಮೊಳಗಿನಿಂದಲೇ ಆಗಬಲ್ಲದೆಂಬ ಅರಿವು ಮೂಡುವುದೋ, ಬಹುಷಃ ಅದು ತೆರೆಯೊಂದು ಸರಿಯಲು, ಹೊಸ ತೆರನಾದ ದೃಷ್ಠಿಕೋನವೊಂದು ತೆರೆದುಕೊಳ್ಳಲು ಪ್ರೇರಕವಾಗಬಲ್ಲದು. ನನ್ನ ವಿಷಯದಲ್ಲಿ ಹೀಗೆಯೇ ಆಯಿತು ಎಂದು ಹೇಳಲು ಬಾರದು- ಕಾರಣ, ಕಾಲ ಸರಿದ ಮೇಲೆ ಪ್ರೇರಣೆಗಳನ್ನು ಹೇಳುವುದು ಸುಲಭ. ಆದರೆ ಹಂತ ಹಂತವಾಗಿ ಮುಂದೆ ಸಾಗುವಾಗ ಮುಂದಿನದರ ಅರಿವಿಲ್ಲದೆ, ಅದಕ್ಕಾಗಿಯೇ ಬೆದರಿದ  ಮನಸ್ಸನ್ನು ಸಂಭಾಳಿಸುವುದು ಅಷ್ಟು ಸರಳವಲ್ಲ. ಹಾಗೆಂದು ಇದು ದುಃಖಕರವಾದ ವಿಚಾರವಲ್ಲ- ನಿಧಾನವಾಗಿ ಹಂತಹಂತವಾಗಿ ಸಾಧಿಸಲು ಹೆಣಗಿ, ‘ಆಗುವುದೋ?’ ಎಂದು ಹೆದರಿ-ಬೆದರಿ, ಬೆಂಡಾಗಿ ಹೆದರಿಕೆಯನ್ನೇ ಅನುಭವಿಸುತ್ತಾ, ಕಡೆಗೆ ಅದನ್ನೇ ಅತ್ತ ಸರಿಸಿ ರಾರಾಜಿಸುವ ಜ್ಞಾನವೇ ಎಂದಿಗೂ ಉಳಿದುಕೊಳ್ಳುವುದು. ಉಳಿದಂತೆ ಕಲಿತದ್ದೆಲ್ಲಾ ಸಾಂದರ್ಭಿಕ!
(¸À±ÉõÀ)

(Image Courtesy- Web)